
Articles
-
1 week ago |
kannadanews.today | Satish Raj Goravigere
ಎಲ್ಲಾ ವರ್ಗದ ರೈತರಿಗೆ ₹57,000 ಶೆಡ್ ನಿರ್ಮಾಣ ಸಹಾಯಧನಪಶು ವೈದ್ಯರಿಂದ ದೃಢೀಕರಣ ಪತ್ರ ಪಡೆದು ಅರ್ಜಿ ಸಲ್ಲಿಸಬೇಕುಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೆರವು ಲಭ್ಯಬೆಂಗಳೂರು (Bengaluru): ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಶೆಡ್ ಅಥವಾ ಕೊಟ್ಟಿಗೆ ನಿರ್ಮಿಸಲು (Shed Construction) ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ₹57,000 ಹಣ ಸಹಾಯಧನವಾಗಿ ನೀಡಲಾಗುತ್ತಿದೆ. ಈ ಮೊದಲು ವರ್ಗಾನುಸಾರದಲ್ಲಿ ವಿಭಜನೆ ಇದ್ದರೂ ಈಗ ಎಲ್ಲಾ ರೈತರಿಗೆ ಸಮಾನ ಸಹಾಯಧನ (Subsidy) ಲಭ್ಯವಾಗಿದೆ. ಶೆಡ್ ನಿರ್ಮಾಣಕ್ಕೆ ಸಹಾಯಧನದ ಮೊತ್ತದಲ್ಲಿ ₹10,556 ಕೂಲಿಗಾಗಿ ಮತ್ತು ಉಳಿದ ₹46,644 ರೂಪಾಯಿ ನಿರ್ಮಾಣ ವೆಚ್ಚಕ್ಕೆ ಬಳಸಬಹುದು.
-
1 week ago |
kannadanews.today | Satish Raj Goravigere
ಮೇಷ ರಾಶಿ (Aries): ಈ ದಿನ ಮಾತುಗಳಿಂದ ಬೇರೆಯವರನ್ನು ಪ್ರಭಾವಿತ ಮಾಡಬಲ್ಲಿರಿ. ಕೆಲಸದಲ್ಲಿ ಚುರುಕು, ಮನಸ್ಸು ಉತ್ಸಾಹದಿಂದ ತುಂಬಿರುತ್ತದೆ. ನೂತನ ಯೋಜನೆಗೆ ಚಾಲನೆ ನೀಡುವದು ಲಾಭದಾಯಕವಾಗಲಿದೆ. ಸಹೋದ್ಯೋಗಿಗಳ ಬೆಂಬಲ ದೊರೆಯಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ. ಹಣಕಾಸು ವಿಚಾರದಲ್ಲಿ ಸ್ವಲ್ಪ ಜಾಗ್ರತೆ ಅಗತ್ಯ. ಹಳೆಯ ಸಾಲ ತೀರಿಸುವ ಯೋಗವಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಬಹುದು. ವೃಷಭ ರಾಶಿ (Taurus): ಇಂದು ನಿಮಗೆ ಹೊಸ ಶಕ್ತಿ ತುಂಬುವ ದಿನ. ಇಂದು ನಿರ್ಣಯಗಳಲ್ಲಿ ಧೈರ್ಯದಿಂದ ಮುನ್ನಡೆಯಬೇಕು. ಹಣಕಾಸಿನಲ್ಲಿ ಸ್ಥಿರತೆ ಬರಲಿದೆ. ಹಳೆಯ ಸ್ನೇಹಿತರಿಂದ ಸಂಪರ್ಕ ಬರಬಹುದು.
-
1 week ago |
kannadanews.today | Satish Raj Goravigere
ವಾರಾಂತ್ಯಗಳಲ್ಲಿ ಮಾತ್ರ ಈ ಟೂರ್ ಲಭ್ಯಎಸಿಯುಳ್ಳ ಬಸ್ಸಿನಲ್ಲಿ ಐತಿಹಾಸಿಕ ದೇವಾಲಯಗಳ ದರ್ಶನವೆಬ್ಸೈಟ್ ಅಥವಾ ಬಿಎಂಟಿಸಿ ಸಹಾಯವಾಣಿ ಮೂಲಕ ಬುಕ್ಕಿಂಗ್ಬೆಂಗಳೂರು (Bengaluru): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವತಿಯಿಂದ ಆರಂಭವಾದ ಹೊಸ ‘ದಿವ್ಯ ದರ್ಶನ’ (Divya Darshan temple tour) ಪ್ಯಾಕೇಜ್ ಪ್ರವಾಸಿಗರಿಗೋಸ್ಕರ ವಿಶೇಷ ಆಕರ್ಷಣೆಯಾಗಿದೆ. ಈ ಪ್ಯಾಕೇಜ್ ಮೂಲಕ, ನಗರ ವ್ಯಾಪ್ತಿಯ ಎಂಟು ಪ್ರಸಿದ್ಧ ದೇವಾಲಯಗಳ ದರ್ಶನವನ್ನು ಒಂದೇ ದಿನದಲ್ಲಿ ಪಡೆಯುವ ಅನುಭವ ಸಿಗುತ್ತದೆ. ಈ ಯೋಜನೆಗೆ ಬುಧವಾರ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಚಾಲನೆ ನೀಡಿದರು.
-
1 week ago |
kannadanews.today | Satish Raj Goravigere |Sai Teja Vasireddy
ಚಿನ್ನದ ಕೇವಲ 75% ಮೌಲ್ಯಕ್ಕಷ್ಟೆ ಸಾಲಬೆಳ್ಳಿಗೂ ಶುದ್ಧತೆಗೆ ಅನುಗುಣವಾಗಿ ಸಾಲ ಸಿಗಲಿದೆಗರಿಷ್ಠ 1 ಕಿಲೋ ಚಿನ್ನದವರೆಗೆ ಮಾತ್ರ ಸಾಲಬ್ಯಾಂಕುಗಳಲ್ಲಿ (Gold loan) ಆಭರಣಗಳನ್ನು ಅಡವಿಡುವ ಮೂಲಕ ತಕ್ಷಣ ಹಣ ಪಡೆಯುವುದು ಈಗ ಸುಲಭದ ಮಾತಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಜಾರಿಗೊಳಿಸಿರುವ ಹೊಸ ನಿಯಮಗಳ ಪ್ರಕಾರ, ಚಿನ್ನದ ಮೌಲ್ಯದ ಕೇವಲ 75 ಪ್ರತಿಶತಕ್ಕಷ್ಟೆ ಸಾಲ ನೀಡಬೇಕು ಎಂಬ ನಿಯಮ ಹೊಸ ಅಡ್ಡಿಗಳನ್ನು ತಂದಿದೆ. ಇದರ ಪರಿಣಾಮವಾಗಿ ಮಧ್ಯಮ ವರ್ಗದವರು ಹಾಗೂ ತುರ್ತು ಸಂದರ್ಭದಲ್ಲಿ ಆರ್ಥಿಕ ನೆರವಿಗೆ ಚಿನ್ನವನ್ನು ಬಳಸಿಕೊಳ್ಳುವವರು ಸಂಕಷ್ಟಕ್ಕೀಡಾಗುವ ಸಾಧ್ಯತೆ ಇದೆ.
-
1 week ago |
kannadanews.today | Satish Raj Goravigere
ಬೆಂಗಳೂರಿನಲ್ಲಿ 24 ಕ್ಯಾರೆಟ್ ಬಂಗಾರದ ಬೆಲೆ ₹97,470ಬೆಳ್ಳಿಯ ಬೆಲೆಯೂ ₹99,900ಕ್ಕೆ ಇಳಿಕೆದೇಶದ ಪ್ರಮುಖ ನಗರಗಳ ಚಿನ್ನದ ಬೆಲೆ ಇಲ್ಲಿದೆಬೆಂಗಳೂರು (Bengaluru), ಮೇ 29: ಇತ್ತೀಚೆಗೆ ಗಗನ ಮುಟ್ಟಿದ್ದ (Gold Price Today) ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಬಂಗಾರದ 10 ಗ್ರಾಂ ಬೆಲೆ ₹97,470ಗೆ ಇಳಿದಿದ್ದು, 22 ಕ್ಯಾರೆಟ್ ಬೆಲೆ ₹89,340 ಆಗಿದೆ. ಇದೊಂದು ಸಣ್ಣ ಮಟ್ಟದ ಇಳಿಕೆಯಾಗಿದ್ದರೂ, ಗ್ರಾಹಕರಿಗೆ ಇದು ಬಿಗ್ ರಿಲೀಫ್ ನೀಡಲಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲದೇ ಹೈದರಾಬಾದ್, ವಿಜಯವಾಡ, ಚೆನ್ನೈ, ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಬೆಲೆ ಸಮಾನವಾಗಿದೆ.
Try JournoFinder For Free
Search and contact over 1M+ journalist profiles, browse 100M+ articles, and unlock powerful PR tools.
Start Your 7-Day Free Trial →