Outlet metrics
Global
#23668
India
#1768
News and Media
#122
Articles
-
1 day ago |
kannadaprabha.com | Girish Linganna
ಭಾರತ ನಿರಂತರವಾಗಿ ಪಾಕಿಸ್ತಾನದ ಜೊತೆಗಿನ ಸಮಸ್ಯೆಗೆ ಮೂರನೆಯವರ ಮಧ್ಯಸ್ಥಿಕೆ ಬೇಕಾಗಿಲ್ಲವೆಂದು ಹೇಳುತ್ತಲೇ ಬಂದಿದೆ. ಆದರೂ, ಅಮೆರಿಕಾ ಮತ್ತೊಮ್ಮೆ ತಾನು ಮಧ್ಯಸ್ಥಿಕೆ ವಹಿಸಬಲ್ಲೆ ಎಂದು ಮುಂದೆ ಬಂದಿದೆ. ಕುತೂಹಲಕರ ಅಂಶವೆಂದರೆ, ಭಾರತೀಯ ಸಂಜಾತೆಯನ್ನು ವಿವಾಹವಾಗಿರುವ, ತನ್ನ ಕಠಿಣ ನಿಲುವಿಗೆ ಹೆಸರಾಗಿರುವ ಅಮೆರಿಕಾದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಈ ಯುದ್ಧದಲ್ಲಿ ಮಧ್ಯ ಪ್ರವೇಶಿಸುವುದು ಅಮೆರಿಕಾಗೆ ಅಗತ್ಯವಿಲ್ಲ ಎಂದಿದ್ದಾರೆ. ಈ ಮೊದಲು ಇಂತಹ ಪರಿಸ್ಥಿತಿ ತಲೆದೋರಿದಾಗ ಅಮೆರಿಕನ್ ನಾಯಕರು ಪಾಕಿಸ್ತಾನಿ ಮುಖಂಡರನ್ನು ವಾಷಿಂಗ್ಟನ್ಗೆ ಕರೆದು, ಕದನದಿಂದ ಹಿಂದೆ ಸರಿಯುವಂತೆ ಕಠಿಣ ಎಚ್ಚರಿಕೆ ನೀಡುತ್ತಿದ್ದರು.
-
3 days ago |
kannadaprabha.com | Girish Linganna
ಪಹಲ್ಗಾಮ್ ಭಯೋತ್ಪಾದನಾ ದಾಳಿಯ ಬಳಿಕ ತಲೆದೋರಿದ ಉದ್ವಿಗ್ನತೆಯಲ್ಲಿ, ಪಾಕಿಸ್ತಾನ ನವದೆಹಲಿಯನ್ನು ಗುರಿಯಾಗಿಸಿ ಫತಾಹ್ 2 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪ್ರಯೋಗಿಸಿತ್ತು ಎನ್ನಲಾಗಿದ್ದು, ಈಗ ಭಾರತ 1990ರ ದಶಕದ ಭಾರತದಂತಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ. ಭಾರತದ ವಾಯು ರಕ್ಷಣಾ ವ್ಯವಸ್ಥೆಗಳು ಅಸಾಧಾರಣವಾಗಿ ಕಾರ್ಯ ನಿರ್ವಹಿಸಿದ್ದು, ಡ್ರೋನ್ಗಳು, ಕ್ಷಿಪಣಿಗಳು, ಅಥವಾ ಯುದ್ಧ ವಿಮಾನಗಳೂ ಸೇರಿದಂತೆ, ಪಾಕಿಸ್ತಾನದ 98 - 99% ದಾಳಿಯನ್ನು ಯಶಸ್ವಿಯಾಗಿ ತಡೆಗಟ್ಟಿದ್ದವು.
-
5 days ago |
kannadaprabha.com | Nagaraja AB
ನವದೆಹಲಿ: ಪಾಕಿಸ್ತಾನಕ್ಕೆ 2.3 ಬಿಲಿಯನ್ ಡಾಲರ್ಗಳ ಸಾಲ ನೀಡುವ IMF ನ ಪ್ರಸ್ತಾವನೆಯನ್ನು ಭಾರತ ಶುಕ್ರವಾರ ವಿರೋಧಿಸಿದ್ದು, ಪಾಕ್ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಗೆ ಹಣ ದುರುಪಯೋಗಪಡಿಸಿಕೊಳ್ಳಬಹುದು ಎಂದು ಹೇಳಿದೆ. ಅಲ್ಲದೇ, ನಿರ್ಣಾಯಕ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಭೆಯಲ್ಲಿ ಮತದಾನದಿಂದ ದೂರ ಉಳಿಯಿತು.
-
6 days ago |
kannadaprabha.com | Nagaraja AB
ರಾವಲ್ಪಿಂಡಿ: ಭಾರತದ ಜೊತೆಗಿನ ಸಂಘರ್ಷವನ್ನು ತಗ್ಗಿಸುವುದಿಲ್ಲ ಎಂದು ಪಾಕಿಸ್ತಾನ ಸೇನೆಯ ವಕ್ತಾರರು ಹೇಳಿದ್ದಾರೆ. ಭಾರತದ ಮೇಲೆ ಕ್ಷಿಪಣಿ, ಫಿರಂಗಿ, ಡ್ರೋನ್ ದಾಳಿ ನಡೆಸಿದ ಬಳಿಕ ಈ ಹೇಳಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನೆ ವಕ್ತಾರ ಅಹ್ಮದ್ ಷರೀಫ್ ಚೌಧರಿ, ಎಂದಿಗೂ ಸಂಘರ್ಷ ತಗ್ಗಿಸಲ್ಲ. ಭಾರತ ನಮಗೆ ಯಾವ ರೀತಿ ಹಾನಿ ಮಾಡಿದೆಯೋ ಅದೇ ರೀತಿ ನಾವು ಕೂಡಾ ಮಾಡಲಿದ್ದೇವೆ ಎಂದರು. ಇಲ್ಲಿಯವರೆಗೂ ನಮ್ಮನ್ನು ನಾವು ರಕ್ಷಿಸಿಕೊಂಡಿದ್ದೇವೆ. ಭಾರತಕ್ಕೆ ಸರಿಯಾದ ಸಮಯದಲ್ಲಿ ಉತ್ತರ ಸಿಗಲಿದೆ ಎಂದು ತಿಳಿಸಿದರು.
-
6 days ago |
kannadaprabha.com | Nagaraja AB
ಅನಂತಪುರ: ಭಾರತ-ಪಾಕಿಸ್ತಾನ ನಡುವೆ ನಡೆಯುತ್ತಿರುವ ಸೇನಾ ಸಂಘರ್ಷದಲ್ಲಿ ಭಾರತೀಯ ಸೇನೆಯ ವೀರ ಯೋಧ ಮೂದ್ ಮುರಳಿ ನಾಯ್ಕ್ ಹುತಾತ್ಮರಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಗೋರಂಟ್ಲ ಮಂಡಲದ ಪುದಗುಂಡ್ಲಪಲ್ಲಿ ತಾಂಡಾದಲ್ಲಿ ದುಃಖದ ಮಡುಗಟ್ಟಿದೆ. ಸುಮಾರು 23 ವರ್ಷ ವಯಸ್ಸಿನ ಮುರಳಿ ನಾಯ್ಕ್ ಅವರು ಡಿಸೆಂಬರ್ 2022 ರಲ್ಲಿ ಸೇನೆಗೆ ಸೇರಿದ್ದರು ಮತ್ತು AV (OPR) ಟ್ರೇಡ್ ಅಡಿಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದರು (ARMY NO : A3451489H)ಮುರಳಿ ನಾಯಕ್ ಬಡತನದ ಹಿನ್ನೆಲೆಯಿಂದ ಬಂದವರು. ಅವರ ಪೋಷಕರಾದ ಎಂ. ಜ್ಯೋತಿಬಾಯಿ ಮತ್ತು ಎಂ. ಶ್ರೀರಾಮ್ ನಾಯ್ಕ್,ದಿನಗೂಲಿ ಕಾರ್ಮಿಕರು.
Kannada Prabha journalists
Try JournoFinder For Free
Search and contact over 1M+ journalist profiles, browse 100M+ articles, and unlock powerful PR tools.
Start Your 7-Day Free Trial →